Slide
Slide
Slide
previous arrow
next arrow

ರಾಷ್ಟ್ರೀಯ ಲೋಕ್ ಅದಾಲತ್: ಹಲವು ಪ್ರಕರಣಗಳು ಇತ್ಯರ್ಥ

300x250 AD

ಯಲ್ಲಾಪುರ: ಪಟ್ಟಣದ ನ್ಯಾಯಾಲಯದಲ್ಲಿ ಶನಿವಾರ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಿತು. ಹಿರಿಯ ಸಿವಿಲ್ ನ್ಯಾಯಾಧೀಶ ಜಿ.ಬಿ.ಹಳ್ಳಕಾಯಿ ಅವರು ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ದಾಖಲಾಗಿದ್ದ ಒಟ್ಟು 117 ಪ್ರಕರಣಗಳಲ್ಲಿ 11 ಪ್ರಕರಣಗಳನ್ನು ಇತ್ಯರ್ಥಪಡಿಸಿದರು. ಸಂಧಾನಕಾರರಾಗಿ ನ್ಯಾಯವಾದಿ ರವಿ ಶಿವನಗೌಡ ಪಾಟೀಲ ಕಾರ್ಯನಿರ್ವಹಿಸಿದರು. ಸರ್ಕಾರಕ್ಕೆ ಒಟ್ಟು 11,99,960 ರೂ ಭರಣ ಮಾಡಲಾಯಿತು. ಸಿವಿಲ್ ನ್ಯಾಯಾಧೀಶೆ ಲಕ್ಷ್ಮೀಬಾಯಿ ಬಸನಗೌಡ ಪಾಟೀಲ ಅವರು ಸಿವಿಲ್ ನ್ಯಾಯಾಲಯದಲ್ಲಿ ದಾಖಲಾಗಿದ್ದ 164 ಪ್ರಕರಣಗಳಲ್ಲಿ 145 ಪ್ರಕರಣಗಳನ್ನು ಇತ್ಯರ್ಥಪಡಿಸಿದರು. ಸಂಧಾನಕಾರರಾಗಿ ನ್ಯಾಯವಾದಿ ವೆಂಕಟರಮಣ ಭಟ್ಟ ಕಾರ್ಯನಿರ್ವಹಿಸಿದರು. ಸರ್ಕಾರಕ್ಕೆ 98,31,889 ರೂ ಭರಣ ಮಾಡಲಾಯಿತು.

ಇದೇ ವೇಳೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಜೋಡಿಯನ್ನು ಸಂಧಾನದ ಮೂಲಕ ಒಂದುಗೂಡಿಸಲಾಯಿತು. ನ್ಯಾಯವಾದಿಗಳು, ಕಕ್ಷಿದಾರರು, ಬ್ಯಾಂಕ್, ಸೊಸೈಟಿ ಅಧಿಕಾರಿಗಳು ಅದಾಲತ್ ನಲ್ಲಿ ಭಾಗವಹಿಸಿದ್ದರು.

300x250 AD
Share This
300x250 AD
300x250 AD
300x250 AD
Back to top